Monday, January 9, 2012

ಮದುವೆಯ ಹೊಸ್ತಿಲಲಿ



ಯೌವನದ ಗಾಂಭೀರ್ಯ
ತುಸು ನಗುವು ವದನದಲಿ
ಎದುರಿಕೆಯ ತವಕವದು
ಕಣ್ಣಂಚಲಿ

ನೂರಾರು ಭಾವಾಂತರಂಗಗಳು
ಎದೆಯಲ್ಲಿ ಪಸರಿಸಿ
ದುಃಖ ಸುಖಗಳು ಸಮ್ಮಿಳಿಸಿ
ಭಯವದುವು ಮನದಲಿ
ತೋರ್ಪಡಿಸಿ


ಇರು ನೀನು ಬೇರೆಯವರೊಡನೆ
ಸಾಕೆಮಗೆ ನಿನ್ನೊಲುಮೆ
ಉಣಬಡಿಸು ಎಲ್ಲರಿಗು ನಿನ್ನಕ್ಕರೆಯ
ಅಡುಗೆಯನು
ಇದ ನೆನೆದು ಕಣ್ಣುಗಳು
ಕಣ್ಣೀರ ಮೊರೆ ಹೊಕ್ಕು
ತಮ್ಮ ನೋವನು
ಬಿತ್ತರಿಸಲೆತ್ನಿಸಿವೆ





ಹೆಣ್ಣು- ನೀನು ಪರರ ಸೊತ್ತೆನುವ
ಮಾತಿಗೆ ಬೆಲೆ ಕೊಟ್ಟು
ಬೇರ್ಪಡಿಸುತಿಹರು ನಿನ್ನ
ಹೆತ್ತವರಿಂದ

ಬಂಧನವು ಹಲವಾರು
ಭಿನ್ನತೆಯು ಅದರೊಳಗೂ
ಕೂಡಿ ಬಾಳಿದರೆ ಅದು
ಅಮೃತದ ಪಾನಕವು
ಚಿರಕಾಲ ಸಿಗಲೆಂದು
ಹಾರೈಕೆಯು




Wednesday, December 28, 2011

ಕರುಣಾಭೂತಿಯ ಮುಖಗಳು

ಭಾಗ ೧

ಕಾಲಲ್ಲಿ ತಳ ಸವೆದ ಚಪ್ಪಲ್ಲು
ಹಳೆಯ- ಮಾಸಲು ಹೋಗುತ್ತಿದ್ದೆವೆಂದು
ಸಾರಿ ಹೇಳುತ್ತಿರುವ ಒಪ್ಪಣದ ಬಟ್ಟೆ
ಕಣ್ಣಲ್ಲಿ ನೂರು ಕನಸುಗಳು
ಮನದಲ್ಲಿ ಸಾವಿರ ಆಲೋಚನೆಗಳು

ಸೀಟಲ್ಲಿ ಕುಳಿತನೆಂದರೆ
ರೋಡಲ್ಲಿ ತನ್ನದೆ ಕಾರುಬಾರು
ಪೀ ಪೀ ಎಂದು ಅವಾಜು ಮಾಡುತ್ತ
ತನಗೆ ಮಾತ್ರ ದಾರಿ ಬಿಡೆಂದು
ರಭಸದಿ ಬಸ್ ಓಡಿಸೋ
ಬಸ್ ಡ್ರೈವರಗಳು

ನಿಗದಿತ ಸಮಯಕ್ಕೆ ನಮ್ಮನ್ನು
ತಲುಪಿಸಿ
ರಾತ್ರಿ ಜಾಗರಣೆಗೆ ಅಣಿವಾಗಿ
ಸುರಕ್ಶಿತವಾಗಿ ಸ್ಥಳಕ್ಕೆ ತಲುಪಿಸುವ
ಕರುಣಾಭಾವಿಗಳು



ಭಾಗ ೨

ಎಣ್ಣೆ ಕಾಣದ ಕೂದಲು
ಸ್ನಾನ ಮಾಡದ ಮೈ
ಮಣ್ಣು ಮಣ್ಣು ಬಟ್ಟೆ
ಅಲ್ಲಲ್ಲಿ ಹರಿದ ಚೂರುಗಳು

ಗುಡಿಸಿಲಿನಲ್ಲಿಯೆ ಜೀವನ
ಬೇರೆ ಅರಮನೆಯೆ ಬೇಕಿಲ್ಲವೆಂದು
ಅಲೆಮಾರಿಗಳಿವರು

ಮಗು ತನಗೆ "ಆ ಆಟಿಕೆ" ಬೇಕೆಂದು
ಅಮ್ಮನ ಸೆರಗು ಹಿಡಿದು
ಬೇಡುತಿರೆ
ಮುಖದಲ್ಲಿ ಕೋಪವಿರಿಸಿ
ಮಗುವನ್ನು
ದೂರತಳ್ಳಿ ಬಾಯಿ ಮುಚ್ಚೆಂದು
ಗದರುತಿಹಳು
ಮಗುವಿನ ಹಟ ಮುಗಿಯಲಿಲ್ಲವೆಂದು
ದರ ದರನೆ ರಟ್ಟೆ ಹಿಡಿದು
ಎಳೆಯುತಿರೆ
ಎಂತ ಕ್ರೂರಿ ಹೃದಯವು
"ಅಯ್ಯೋ" ಅನಲೇಬೇಕು

ಶಾಲೆ ಕಾಣದ ಹಸು ಕಂದಮ್ಮಗಳು
ಗುಡಿಸಿಲಿನಲ್ಲಿ ಮಲಗಿ
ಕನಸು ಕಾಣುವ ಕೂಸುಗಳು
ಬಡತನದ ಬೇಗೆಯಲಿ ಬೆಂದು
ಅಮ್ಮನ ಕರುಣೆ-ರಹಿತ
ಧೋರಣೆಗೆ ಬಲಿಯಾಗಿ
ಜೀವನವಿಡಿ ಅಲೆಯುತ್ತ
ಕಳೆಯುವುದೇ??!!!



ಭಾಗ ೩

"ಅಮ್ಮ" "ಅಕ್ಕ" "ತಂಗಿ" "ಅಯ್ಯ"
ಎಂದೆಲ್ಲ ಸಂಬೋಧಿಸಿ
ಕೈಯಲ್ಲಿ ವಿಚಿತ್ರ ಆಕಾರದ
ಬಟ್ಟಲು ಹಿಡಿದು
ಭಿಕ್ಷೆಯ ಅಂಗಲಾಚುತಿರೆ
ಮನವದುವು ಒಮ್ಮೆ ಮೌನವಾಗಿ
ಸ್ಪಂದಿಸಿ ಬೇರೆ ಏನನ್ನೋ
ಯೋಚಿಸಲು

ಎಲ್ಲೆಂದರಲ್ಲಿ ಕಾಣಸಿಗುವ
ಈ ಅಪರೂಪವಲ್ಲದ
ಮುಖಗಳಿಗೆ
ಕರುಣೆಯ ತೋರಲು ಬೇಕೇ?!!

ಕಾಲಲ್ಲಿ ತ್ರಶೆಯಿದ್ದು
ಕೈಯಲ್ಲಿ ಬಲವಿದ್ದು
ದುಡಿದು ತಿನ್ನಲು
ಏಕೆ ಅಸಾಧ್ಯ?

ಬಾಡಿ ಹೋದ ಹಳೆ ಚೈತನ್ಯಗಳಿಗೆ
ಈ ಮಾತು ಅನ್ವಯಿತವಾಗದೆ
ಇಂತ ಜೀವಗಳಿಗೆ ಕರುಣೆಯ ತೋರಲು
ಯಾರಿಲ್ಲವೆ





Monday, July 5, 2010





೧. ???

ಗಾಳಿ ಬೀಸಿತು ತಣ್ಣನೆ
ಹಾರಿ ಹೋಗಲೆ ಮೆಲ್ಲನೆ
ಮನದಲ್ಲೇಕೋ ತಳಮಳ
ಯಾಕಂತೆ??
ಗೊತ್ತಾಗಲಿಲ್ಲ...!!!!
ನೀನಾದರು ಹೇಳು ಪರಿಮಳ.....





೨. ಗೆಳೆಯನ ನೆನಪು

ಇಂದೇಕೋ ಕಾಡುತ್ತಿದೆ
ಈ ನನ್ನ ಮನಸ್ಸು
ಬರಲಿಲ್ಲವಲ್ಲ,ಅಂದು
ಕಂಡಿದ್ದ ಕನಸು.....





೩. ನಾ ಕಂಡ ಜೀವನ

ಕಾಗದದ ಹಾಳೆಯಂತೆ
ಈ ನನ್ನ ಜೀವನ
ಗಾಳಿ ಬಂದಾಗ ಮಾತ್ರ
ಪಟ ಪಟ ಸಿಂಚನ
ಇರುವುದು ಸುಮ್ಮನೆ
ದಿನವೂ ಹೀಗೆ
ಆದರೂ ಕಾಡುವುದು
ಹಾಳೆ ಹರಿದರೆ ಮುಂದೇನು?:-(

ಗೀಚಿ ಹೋದವು ಏನೇನೋ ಇದರಲ್ಲಿ
ಕಾಣದಾದವು ಹಿಂದಿನದು ಇದರಲಿ
ಭವಿಷ್ಯಕ್ಕಂತೂ ಕೊನೆಯಿಲ್ಲ ಮೊದಲಿಲ್ಲ
ವರ್ತಮಾನಕ್ಕೊಂದೇ ಈ ಹಾಳೆ ಮೀಸಲು.........





೪. ವಿಸ್ಮಯ

ಬಾಳ ದಾರಿಯಲ್ಲಿ ನಡೆದೆ ಹುಚ್ಚಿಯಂತೆ
ಬಣ್ಣ ಬಣ್ಣದ ಕನಸು ಕಟ್ಟಿ
ಕನಸು ನನಸಾಗಲಿಲ್ಲ ಇಲ್ಲಿವರೆಗೂ:-)
ಪಡೆದೆ ನೂರೆಂಟು ನೆನಪುಗಳ

ಬೇಕು ಬಾಳಿಗೀಗ ಆಧಾರ
ಕೋಲಾಗಿ ನಿಲ್ಲುವನೆ ಈತನು!!!!!??




ಒಂದು ಮಳೆಗಾಲದ ಮುಸ್ಸಂಜೆಯ ಘಳಿಗೆ...........












ಮನಸ್ಸು ತುಂಬಾ ಭಾರವಾಗಿತ್ತು. ಮನೆಯ ಹೊರಾಂಗಣದಲ್ಲಿ ಕುರ್ಚಿ ಹಾಕಿ ಕೂತಿದ್ದೆ. ಮನಸ್ಸು ಹಗುರವಾಗಲು ಕಾತುರ. ಆ ಹಸಿರಿನ ಮಡಿಲಲ್ಲಿ ಕುಳಿತಾಗ ಮನಸ್ಸು,ಹೃದಯ ಕಾಲಿಗೆ ಕಟ್ಟ ಚಕ್ರದಂತೆ ಹಿಂದೆ ಮುಂದೆ ಹರಿದಾಡಿತು. ಹಾಗೆಯೇ ಅದನ್ನೇಕೆ ಪುಟದಲ್ಲಿ ಅಚ್ಚಿಡಬಾರದೆಂಬ ಬಯಕೆ. ಅದಕ್ಕೆ ಈ ಪ್ರಯತ್ನ.:-)

ಸರಿ..

ಮನಸ್ಸು ನೀರಸವಾಗಿ ಆಕಾಶದತ್ತ ಶೂನ್ಯ ದೃಷ್ಟಿ ನೆಟ್ಟಿತ್ತು. ಕಪ್ಪು ಮೋಡಗಳು ನಿಧಾನವಾಗಿ ವಿದಾಯದ ಸಂಕೇತವಾಗಿ ಹೋಗುತ್ತಿರುವಂತೆ ಭಾಸವಾಯಿತು. ಮೋಡದಲ್ಲಿ ಹುದುಗಿದ ನೀರಿನ ಹನಿಗಳು ಭೂಮಿಗೆ ಬರುವ ಆತುರತೆ ಕಾಣತೊಡಗಿತು. ಭೂಮಿಯು ನವೋಲ್ಲಾಸದ ಸಂಭ್ರಮಕ್ಕೆ ಕಾಯುತ್ತಿರುವಂತೆ ಮನದಲ್ಲೂ ಸಹ ಖುಷಿಯ ರೇಖೆಗಳು ಮೂಡತೊಡಗಿದವು.

ಪ್ರಕೃತಿ ನೋಡಿ ಯಾರೋ ಒಬ್ಬ ಕವಿತೆ ಬರೆದನಂತೆ.ಈ ಪ್ರ ಕೃತಿ ನನ್ನ ಮನದಲ್ಲು ಏನೇನೋ ಮೋಡಿ ಮಾಡಿ ಮನಸಿನ ಏಕಾಂತಕ್ಕೆ ಸಾಥ್ ನೀಡಿತು.

ಮುಗ್ದ್ಜ ಮನಸ್ಸು ಫ್ರೌಢತೆಯ ಮೆಟ್ಟಿಲು ಏರುವ ತವಕ.ಆ ಕಿಲಕಿಲ ನಗು ಮುಗುಳ್ನಗೆಯಾಗಿ ಪರಿವರ್ತನೆ ಆಗುತ್ತ ಇದೆ...
ಎಷ್ಟೊಂದು ವ್ಯತ್ಯಾಸ....:-)

ಮನಸ್ಸಿನ ಏಕಾಂತಕ್ಕೆ ಮುಕ್ತಿ ಸಿಕ್ಕಿ ,ಅಪ್ಪ ಅಮ್ಮ ತಂಗಿಯರೊಡನೆ ಸಮಯ ಕಳೆಯಲು ಹಜಾರಕ್ಕೆ ಬಂದೆ.......